logo

ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ವತಿಯಿಂದ ಬೃಹತ್ ಪ್ರತಿಭಟನೆ

ತಾಲೂಕು ಕಚೇರಿ ಮುಂಭಾಗ ಭಾರತ ಕಮ್ಯುನಿಸ್ಟ್ ಪಕ್ಷದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ.

ಗೌರಿಬಿದನೂರು, ನಗರದ ಹೊರವಲಯದಲ್ಲಿರುವ ತಾಲೂಕು ಕಚೇರಿಯ ಮುಂಭಾದಲ್ಲಿ ಸಿಪಿಎಂ ( ಮಾರ್ಕ್ಸ್ ವಾದಿ ) ಪಕ್ಷದ ವತಿಯಿಂದ ಸುಮಾರು ಎಂಟು ಬೇಡಿಕೆಗಳನ್ನು ಮುಂದಿಟ್ಟು ಗುರುವಾರ ಪ್ರತಿಭಟನೆ ನಡೆಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಸಿದ್ದಗಂಗಪ್ಪ ತಾಲೂಕಿನಾದ್ಯಂತ ಜನಸಾಮಾನ್ಯರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ತಾಲ್ಲೂಕು ಆಡಳಿತ ವಿಫಲವಾಗಿದೆ, ಜಲಾನಯನ ಇಲಾಖೆಯಲ್ಲಿ ಹಾಗೂ ನರೇಗಾದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ ಎಂದರೆ ತಾಲೂಕಿನಾದ್ಯಂತ ಸುಮಾರು 6 ಕೋಟಿ ರೂಗಳಷ್ಟು ಅಕ್ರಮ ನಡೆದಿದೆ ಇದರ ಬಗ್ಗೆ ಒಂದು ಕಮಿಟಿಯನ್ನು ರಚಿಸಿ ಸಮಗ್ರ ತನಿಖೆ ಮಾಡಬೇಕು

ತಾಲೂಕಿನಾದ್ಯಂತ ನಿವೇಶನರಹಿತರಿಗೆ 20 ಸಾವಿರ ಖಾಲಿ ನಿವೇಶನಗಳನ್ನು ಮಂಜೂರು ಮಾಡಿಕೊಡಬೇಕು.

ನಮ್ಮ ತಾಲೂಕಿನಲ್ಲಿ ಅರ್ಹ ಕಟ್ಟಡ ಕಾರ್ಮಿಕರನ್ನು ಗುರುತಿಸಿ ಕಾರ್ಮಿಕ ಚೀಟಿಯನ್ನು ನೀಡಬೇಕು ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿನ ಸೌಲಭ್ಯಗಳನ್ನು ನೀಡದೆ ಮಧ್ಯವರ್ತಿಗಳು ಅದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಇದನ್ನು ತಡೆಗಟ್ಟ ಬೇಕು.

ಅದೇ ರೀತಿ ಕುಡುಮಲಕುಂಟೆ ಕೈಗಾರಿಕಾ ವಲಯವು ಅದೊಂದು ರಿಯಲ್ ಎಸ್ಟೇಟ್ ಅಡ್ಡೆಯಾಗಿದೆ ಮೊದಲನೇ ಹಾಗೂ ಎರಡನೇ ಹಂತದಲ್ಲಿ ಸುಮಾರು 2000 ಎಕರೆಯಷ್ಟು ಜಮೀನನ್ನು ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರವು ವಶಪಡೆಸಿಕೊಂಡಿದ್ದು,
ಈವರೆಗೂ 70% ರಷ್ಟು ನಿವೇಶನಗಳು ಕೈಗಾರಿಕೆಗಳು ಇಲ್ಲದೆ ಖಾಲಿ ಉಳಿದಿದ್ದರು ಸಹ ತಾಲ್ಲೂಕು ಆಡಳಿತ ಸದರಿಯವರ ಮೇಲೆ ಕ್ರಮ ಜರುಗಿಸದೆ ತಾಲೂಕಿನ ಯುವ ಜನತೆಗೆ ಉದ್ಯೋಗಾವಕಾಶಗಳನ್ನು ಕಲ್ಪಿಸದೆ ರೈತರಿಗೆ ಯಾವುದೇ ರೀತಿ ನ್ಯಾಯ ಮಾದಡಿರುವುದಿಲ್ಲ

ಇಲ್ಲಿ ಪರಿಸರಕ್ಕೆ ಹಾನಿ ಹಾಗೂ ಮಾಲಿನ್ಯವನ್ನು ಉಂಟು ಮಾಡುವ ಕಾರ್ಖಾನೆಗಳು ಮಾತ್ರ ಸ್ಥಾಪನೆ ಮಾಡಿದ್ದಾರೆ.

ಭೂಮಿಯನ್ನು ಖರೀದಿಸಿ ಎರಡು ವರ್ಷದ ಅವಧಿಗೂ ಮೇಲ್ಪಟ್ಟಿರುವ ಖಾಲಿ ಇರುವಂತಹ ನಿವೇಶನಗಳನ್ನು ಮತ್ತೆ ಸರ್ಕಾರ ವಶಪಡಿಸಿಕೊಂಡು ಯಾರು ಕಾರ್ಖಾನೆ ನಿರ್ಮಿಸಲು ಆಸಕ್ತಿ ತೋರುತ್ತಾರೋ ಅಂತವರಿಗೆ ಅದನ್ನು ನೀಡಿ ಸಹಕರಿಸಬೇಕು ಇದರಿಂದ ನಿರುದ್ಯೋಗವನ್ನು ಹೋಗಲಾಡಿಸಲು ಅನುಕೂಲವಾಗುವುದು,

ಅದೇ ರೀತಿ ನಾವು ಈ ಹಿಂದೆ ಮೈಕ್ರೋ ಫೈನಾನ್ಸ್ ಗಳಿಂದ ಆಗುತ್ತಿದ್ದ ಕಿರುಕುಳದ ಬಗ್ಗೆ ಧ್ವನಿ ಎತ್ತಿದ ಸಮಯದಲ್ಲಿ ಮಾನ್ಯ ತಹಶಿಲ್ದಾರರು ಸುಮಾರು 80% ಸಮಸ್ಯೆಯನ್ನು ಹೋಗಲಾಡಿಸಿದ್ದರು,ಆದರೂ ಸಹ ಇನ್ನೂ ಕೆಲವು ಫೈನಾನ್ಸ್ ಗಳಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದ್ದು ಅವರ ಮೇಲೆ ಕ್ರಮ ಜರುಗಿಸಿ ಬಡವರನ್ನು ಕಾಪಾಡಬೇಕು ಎಂದರು.

ನಗರಗೆರೆ ಹೋಬಳಿ ಮಲ್ಲೇನಹಳ್ಳಿ ಕ್ರಾಸ್ ಬಳಿ ಜಾನುವಾರುಗಳ ಮೇವಿಗೆಂದು ಆಶ್ರಯವಾಗಿದ್ದ ಸರ್ಕಾರಿ ಗೋಮಾಳವನ್ನು ಸೋಲಾರ್ ಪ್ಲಾಂಟ್ ಗೆ ನೀಡಿರುವುದನ್ನು ಕೂಡಲೇ ಹಿಂಪಡೆದು ಅದನ್ನು ಜಮೀನು ಇಲ್ಲದಿರುವಂತಹ ಜನರಿಗೆ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ಮನವಿ ಪತ್ರವನ್ನು ಸ್ವೀಕರಿಸಿ ತಹಶೀಲ್ದಾರ್ ಮಹೇಶ್ ಎಸ್ ಪತ್ರಿ ಅವರು ಮಾತನಾಡಿ ನಿಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿ ಈಗಾಗಲೇ ಖಾಲಿ ನಿವೇಶನಗಳಿಗೆಂದು ತಾಲೂಕಿನಾದ್ಯಂತ ಸುಮಾರು 213 ಎಕರೆ ಜಮೀನನ್ನು ಗುರುತಿಸಿದ್ದು ಸದರಿ ಕಾರ್ಯವು ಚುರುಕಾಗಿ ಸಾಗುತ್ತಿದೆ ಆದಷ್ಟು ಬೇಗ ತಾಲೂಕಿನ ನಿವೇಶನ ರಹಿತರಿಗೆ ನಿವೇಶನಗಳನ್ನು ಹಂಚಬೇಕೆಂದು ಮಾನ್ಯ ಶಾಸಕರು ಆದೇಶಿಸಿದ್ದು ಅದರಂತೆಯೇ ನಾವು ಕಾರ್ಯವನ್ನು ನಿರ್ವಹಿಸುತ್ತಿದ್ದೇವೆ, ಉಳಿದೆಲ್ಲ ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಸಿ ಕೊಡುವುದಾಗಿ ಹೇಳಿದರು.

ಇದೇ ವೇಳೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಜಿಲ್ಲಾ ಮುಖಂಡರುಗಳಾದ
ಮುನಿ ಕೃಷ್ಣಪ್ಪ
CC ಅಶ್ವತಪ್ಪ
ತಾಲೂಕು ಮುಖಂಡರುಗಳಾದ ರವಿಕುಮಾರ್
ನಾಗರಾಜು,ಇಬ್ರಾಹಿಂ ಚಿಕ್ಕನಾಯ್ಡು , ಲಕ್ಷ್ಮೀನಾರಾಯಣಪ್ಪ ಹಾಗೂ ಪಕ್ಷದ ಕಾರ್ಯಕರ್ತರು ಜನಸಾಮಾನ್ಯರು ಉಪಸ್ಥಿತರಿದ್ದರು.

57
4703 views