
ನಗರಗೆರೆ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜದ ವಿಷಯದಲ್ಲಿ ರೈತರಿಗೆ ತಾರತಮ್ಯ
ಗೌರಿಬಿದನೂರು: ರಾಜ್ಯ ಸರ್ಕಾರದ ಖಾದ್ಯ ತೈಲ ಅಭಿಯಾನ ಎಣ್ಣೆ ಕಾಳು ಬೆಳೆವಾರು ಮೌಲ್ಯ ಸರಪಳಿ ಗುಚ್ಛದಳ ಕಾರ್ಯಕ್ರಮದಡಿ ನೆಲಗಡಲೇ ಉಚಿತ ವಿತರಣೆಯಲ್ಲಿ ತಾರತಮ್ಯ ನಡೆಯುತ್ತಿದೆ.
ಹೋಬಳಿಯ 38 ಹಳ್ಳಿಗಳ ರೈತರು, ವೃದ್ಧರು, ಮಹಿಳೆಯರು ಪ್ರತಿ ದಿನ ರೈತ ಸಂಪರ್ಕ ಕೇಂದ್ರದ ಬಳಿ ಬಂದು ದಿನವಿಡೀ ಕಾದು ಕಾದು ವಾಪಸ್ಸು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ರೈತರಿಗೆ ಉಚಿತವಾಗಿ ನೀಡಬೇಕಾದ ನೆಲಗಡಲೆಯ ಜೊತೆಗೆ 500 ರೂಗಳನ್ನು ನೀಡಿ ಔಷದಿ ತೆಗೆದುಕೊಂಡರೆ ಮಾತ್ರ ನೆಲಗಡಲೆ ನೀಡುತ್ತೇವೆ ಇಲ್ಲವಾದಲ್ಲಿ ನಾವು ನೀಡುವುದಿಲ್ಲ ಇದು ಕಡ್ಡಾಯವಾಗಿ ತೆಗೆದುಕೊಳ್ಳಬೇಕೆಂದು ಅಧಿಕಾರಿಗಳು ರೈತರಿಗೆ ಒತ್ತಾಯ ಪೂರ್ವಕವಾಗಿ ನೀಡುತ್ತಿದ್ದಾರೆ ನೀಡಿದ ಔಷಧಿಯನ್ನು ಹೇಗೆ ಬಳಸುವುದು ಎನ್ನುವುದನ್ನು ಸಹಾ ಯಾರು ನಮಗೆ ತಿಳಿಸುತ್ತಿಲ್ಲ ಎಂದು ರೈತರು ಹೇಳುತ್ತಿರುವುದು,
ನಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಸುಮಾರು 6 ದಿನಗಳಿಂದ ಅಲೆದಾಡುತ್ತಿದ್ದರು ಸಹಾ ಯಾವುದೇ ರೀತಿಯ ಕ್ರಮ ವಹಿಸದೆ ಅಧಿಕಾರಿಗಳು ತಮಗೇನು ತಿಳಿಯದ ರೀತಿಯಲ್ಲಿ ವರ್ಥಿಸುತ್ತಿರುವುದು ತುಂಬಾ ದಯಾನೀಯ ಎಂದು ರೈತರು ಆಕ್ರೋಶ ವ್ಯಕ್ತ ಪಡಿಸಿದರು
ಸರ್ಕಾರವು ರೈತರಿಗೆ ಗುಣಮಟ್ಟದ ಬೀಜಗಳನ್ನು ಉಚಿತವಾಗಿ ನೀಡುವುದರ ಮೂಲಕ ಉತ್ತಮವಾದ ಫಸಲು ಬರುತ್ತದೆ ಎಂದು ಯೋಚಿಸಿ ರೂಪಿಸಿರುವ ಈ ಯೋಜನೆಯನ್ನು ಕೆಲವು ಅಧಿಕಾರಿಗಳು ತಮ್ಮ ಸ್ವಲಾಭಕ್ಕಾಗಿ ರೈತರಿಗೆ ತೀವ್ರ ಅನ್ಯಾಯ ಮಾಡಿ ಬಲಿಷ್ಠರಿಗೆ, ಉಳ್ಳವರಿಗೆ, ರಾಜಕೀಯ ಹಿನ್ನಲೆ ಇರುವವರಿಗೆ ಮಾತ್ರ 3 ಮೂಟೆ ಕಡಲೆ ಕಾಯಿ ನೀಡಿ ರೈತರಿಗೆ ಮಾತ್ರ ತಲಾ ಒಂದು ಮೂಟೆ ವಿತರಿಸಲಾಗುತ್ತಿದೆ, ನಾವು ಇದರ ಬಗ್ಗೆ ಪ್ರಶ್ನೆ ಮಾಡಿದರೆ ನಮಗೆ ಮೇಲಧಿಕಾರಿಗಳು ಸೂಚಿಸಿದ ಹಾಗೆ ಮಾಡುತ್ತೇವೆ , ನಮ್ಮ ಕೈಯಲ್ಲಿ ಏನು ಇಲ್ಲಾ ಎಂದು ತಮಗೇನು ತಿಳಿಯದ ರೀತಿಯಲ್ಲಿ ವರ್ತಿಸುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಸ್ಥಳೀಯ ರೈತರಾದ ನಳಿನಿ ಮತ್ತು ಲಕ್ಷ್ಮಿ ಮಾತನಾಡಿ ನಾವು ಸುಮಾರು ಏಳು ದಿನಗಳ ಹಿಂದೆ ದಾಖಲೆಗಳನ್ನು ನೀಡಿದ್ದರು ಸಹ ನಮಗೆ ನೆಲಗಡಲೆ ಬೀಜ ನೀಡುತ್ತಿಲ್ಲ ನಮ್ಮ ಹಿಂದೆ ಬಂದವರಿಗೆಲ್ಲ ವಿತರಿಸಲಾಗಿದೆ, ನಾವು ಕೇಳಿದರೆ ನೀವು ಈಗ ಹೊಸದಾಗಿ ದಾಖಲೆಗಳನ್ನು ನೀಡಿ ಎನ್ನುತ್ತಿದ್ದಾರೆ.
ಈಗ ಮತ್ತೆ ಹೊಸದಾಗಿ ದಾಖಲೆಗಳನ್ನು ನೀಡಿದ ಮೇಲೆ ನಿಮಗೆ ಓ, ಟಿ,ಪಿ ಬರುತ್ತಿಲ್ಲವೆಂದು ಅವರಿಗೆ ಬೇಕಾಗಿರುವಂತಹವರಿಗೆ ಯಾವುದೇ ಅಡ್ಡಿ ಅಡಚಣೆ ಇಲ್ಲದೆ ನೀಡುತ್ತಿದ್ದಾರೆ.
ಬೇರೆಯವರು ಯಾರೇ ಬಂದರು ಸಹಾ ತಾಂತ್ರಿಕ ದೋಷ ನೆಟ್ವರ್ಕ್ ಇಶ್ಯೂ ಇದೆ ಎಂದು ರೈತರನ್ನು ಯಾಮಾರಿಸುತ್ತಿದ್ದಾರೆ.
ಆದುದರಿಂದ ಇದಕ್ಕೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಬಂದು ಇಲ್ಲಿನ ಸಮಸ್ಯೆಯನ್ನು ಬಗೆಹರಿಸಬೇಕು ಇಲ್ಲವಾದಲ್ಲಿ ಎಲ್ಲಾ ರೈತರು ರೈತ ಸಂಪರ್ಕ ಕೇಂದ್ರದ ಮುಂದೆ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು.