logo

ಕನಕ ಭವನದಲ್ಲಿ 23ನೇ ವರ್ಷದ ಪ್ರತಿಭಾ ಪುರಸ್ಕಾರ ಹಾಗೂ ಸಹಾಯಧನ ವಿತರಣಾ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ: ಕನಕ ವಿದ್ಯಾಭಿವೃದ್ಧಿ ನಿಧಿ ಟ್ರಸ್ಟ್ ವತಿಯಿಂದ ಈ ದಿನ ಕನಕ ಭವನದಲ್ಲಿ 23ನೇ ವರ್ಷದ ಪ್ರತಿಭಾ ಪುರಸ್ಕಾರ, ಶಾಲಾ ಶುಲ್ಕ ವಿತರಣೆ ಹಾಗೂ ಸಹಾಯಧನ ವಿತರಣಾ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನಾ ಸಮಿತಿ ತಾಲೂಕು ಅಧ್ಯಕ್ಷ ಸಿ.ಡಿ. ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್. ಕಾಂತರಾಜು, ನಿವೃತ್ತ ಪ್ರಾಂಶುಪಾಲೆ ಎನ್. ಇಂದಿರಮ್ಮ, ಮಹಿಳಾ ಪೊಲೀಸ್ ಉಪನಿರೀಕ್ಷಕಿ ದ್ರಾಕ್ಷಾಹಿನಿ, ಕೃಷಿ ಇಲಾಖೆ ತಾ. ನಿರ್ದೇಶಕ ಶಿವರಾಜ್ ಕುಮಾರ್, ಕನಕ ಸಮಿತಿ ಅಧ್ಯಕ್ಷ ಶ್ರೀ ಕಂಠಯ್ಯ, ಕನಕ ಭವನ ಅಧ್ಯಕ್ಷ ಗುರುಮೂರ್ತಿ, ಮತ್ತು ಸ್ಥಳೀಯ ಶಾಲೆಗಳ ಮುಖ್ಯೋಪಾಧ್ಯಾಯರು ಭಾಗವಹಿಸಿದ್ದರು.

96% ಕ್ಕೂ ಹೆಚ್ಚು ಅಂಕ ಗಳಿಸಿದ 16 ಪ್ರತಿಭಾನ್ವಿತ ವಿದ್ಯಾರ್ಥಿಗಳು ಪ್ರಶಸ್ತಿಪತ್ರ ಹಾಗೂ ಸ್ಮರಣಿಕೆಯಿಂದ ಗೌರವಿಸಲ್ಪಟ್ಟರು. ಕಾರ್ಯಕ್ರಮದಲ್ಲಿ 3,000 ನೋಟು ಪುಸ್ತಕಗಳು ವಿತರಣೆ ಆಗಿದ್ದು, 6 ಪ್ರೌಢಶಾಲೆ ಮಕ್ಕಳಿಗೆ ಶಾಲಾ ಶುಲ್ಕ ನುಡಲಾಯಿತು. 4 ಇಂಜಿನಿಯರಿಂಗ್ ವಿದ್ಯಾರ್ಥಿಗಳು, 1 ಡಿಪ್ಲೋಮಾ ವಿದ್ಯಾರ್ಥಿ, ಮತ್ತು 5 ನರ್ಸಿಂಗ್ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಲಾಯಿತು.

ಅದೇ ರೀತಿ ಅಲೆಮಾರಿ ಸಮುದಾಯದ 5 ಮಕ್ಕಳಿಗೆ ಶಾಲಾ ಬ್ಯಾಗ್, ಪುಸ್ತಕ ಹಾಗೂ ಪೆನ್ಗಳನ್ನು ನೀಡಲಾಯಿತು. ನೂರಾರು ಮಕ್ಕಳು ಹಾಗೂ ಪಾಲಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

11
1537 views