ಮಾರಕಾಸ್ತ್ರಗಳಿಂದು ಕೊಚ್ಚಿ ಮೂವರ ಬರ್ಬರ ಹತ್ಯೆ
ಕಲಬುರಗಿಯ ಪಟ್ನಾ ಗ್ರಾಮ ಬಳಿ ಮಂಗಳವಾರ ರಾತ್ರಿ ಮೂರು ಸಂಬಂಧಿಕರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಸಿದ್ಧಾರೂಢ (32), ಜಗದೀಶ (25) ಮತ್ತು ರಾಮಚಂದ್ರ (35) ಎಂಬುವವರು ಹತ್ಯೆಗೀಡಾಗಿದ್ದಾರೆ. ಹಳೆ ವೈದ್ಯಮದ ಹಿನ್ನಲೆಯಲ್ಲಿ ಮಂಗಳವಾರ ರಾತ್ರಿ ಡಾಬಾದಲ್ಲಿ ಕೆಲಸ ಮಾಡುತ್ತಿದ್ದಾಗ ಡಾಬಾಗೆ ನುಗ್ಗಿ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ . ಸಬ್ ಅರ್ಬನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.