logo

ಕೋಲಾರ ಜಿಲ್ಲೆ , ಶ್ರೀನಿವಾಸ್ ಪುರ ತಾಲೂಕು ನಾರಾಯಣಪುರ ಗ್ರಾಮದಲ್ಲಿ ದಲಿತರ ಭೂಮಿ ಬಲಾಡ್ಯರಿಂದ ಕಬ್ಬಳಿಕೆ

ಶ್ರೀನಿವಾಸಪುರ ತಾಲೂಕು ಯಲ್ದುರ್ ಹೋಬಳಿ ಶೇಷಾಪುರ ಮಜುರ ನಾರಾಯಣಪುರ ಗ್ರಾಮದ ಸರ್ವೆ ನಂಬರ್ 81/4A ರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಲಿಂಗಪ್ಪ ಎಂಬುವರಿಗೆ 3 ಎಕರೆ ಜಮೀನು 1983 ಸೆಪ್ಟೆಂಬರ್ 13ನೇ ತಾರೀಕು ದರಖಾಸ್ತ ಮೂಲಕ ಮಂಜೂರಾಗಿರುತ್ತದೆ ಈ ಜಮೀನನ್ನು ಸರ್ಕಾರವು 15 ವರ್ಷಗಳ ಕಾಲ ಯಾರಿಗೂ ಸಹ ಪರಭಾರೆ ಮಾಡಬಾರದು ಎಂಬ ಶರತ್ತು  ವಿಧಿಸಿರುತ್ತದೆ  ಹೀಗಿರುವಲ್ಲಿ 9.5.1996 ರಲ್ಲಿ  ಶಾಹಿದ್ ಉಲ್ಲಾಖಾನ್ ಬಿನ್ ಅಬ್ದುಲ್ ರವೊಪ್ ಖಾನ್  ಎಂಬವರು ಕ್ರಯ ಮಾಡಿಕೊಂಡಿರುತ್ತಾರೆ ತದನಂತರ 10.07.2006ರಲ್ಲಿ ಫಯಾಜ್ ಅಹ್ಮದ್ ಬಿನ್ ಹೈದರ್ ಸಾಬ್ ಎಂಬವರಿಗೆ ಕ್ರಯ ಮಾಡಿಕೊಂಡಿರುತ್ತಾರೆ ತದನಂತರ ದಿನಾಂಕ 19.2.2012 ರಲ್ಲಿ  ಮುಡಿಯನೂರು  ಗ್ರಾಮದ ಬಿ ವಿ ನಾರಾಯಣ್ ಬಿನ್ ಲೇಟ್ ಪಟ್ಟಾಬಿ ರಾಮಯ್ಯ ಎಂಬವರು ಕ್ರಯೆ ಮಾಡಿಕೊಂಡಿರುತ್ತಾರೆ ಬಿ ವಿ ನಾರಾಯಣ್ ಎಂಬವರು  10.10.2024 ರಲ್ಲಿ ತೇಜಸ್ ಬಿ ರೆಡ್ಡಿ ಬಿನ್ ಭಾಸ್ಕರ್ ರೆಡ್ಡಿ ಎಂಬವರಿಗೆ ಮಾರಾಟ ಮಾಡಿರುತ್ತಾರೆ ಈ ಜಮೀನಿಗೆ ಸಂಬಂಧಿಸಿದಂತೆ ಲಿಂಗಪ್ಪ ಮಗನಾದ ಮುನಿ ವೆಂಕಟರಾಮ ಕುಟುಂಬದವರು ಸಹಾಯಕ ಕಮಿಷನರ್ ಕೋಲಾರ ಉಪ ವಿಭಾಗ ರವರ ನ್ಯಾಯಾಲಯ ಪ್ರಕರಣದ ಸಂಖ್ಯೆ ಎಲ್ ಎನ್ ಡಿ/ ಎಸ್ಸಿಎಸ್‌ಟಿ /45/2018 ದಿನಾಂಕ 28 6 2018 ರಂದು ಈ ಮೇಲ್ಕಂಡ ವ್ಯಕ್ತಿಗಳ ಮೇಲೆ ನ್ಯಾಯಾಲಯದಲ್ಲಿ ಕೇಸ್ ದಾಖಲೆ ಆಗಿರುತ್ತದೆ,

3
660 views