
ಗೌರಿಬಿದನೂರಿನಲ್ಲಿ ಬೆದರಿಕೆ ರಾಜಕಾರಣ ನಡೆಯುತ್ತಿದೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್, ವಿ, ಮಂಜುನಾಥ್
ಶಾಸಕ ಕೆ,ಎಚ್,ಪುಟ್ಟಸ್ವಾಮಿ ಗೌಡರ ವಿರುದ್ದ ಗುಡುಗಿದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್,ವಿ,ಮಂಜುನಾಥ್.
ತಾಲ್ಲೂಕಿನಲ್ಲಿ ಬೆದರಿಕೆ ಹಾಗು ಹಣದ ಆಮಿಷಗಳಲ್ಲಿ ರಾಜಕಾರಣ ಹೆಚ್ಚಾಗಿ ಅಭಿವೃದ್ಧಿ ಕುಂಟಿತವಾಗಿದೆ.
ಕೆಎಚ್.ಪುಟ್ಟಸ್ವಾಮಿಗೌಡರನ್ನು ನಾವು ಹಗಲಿರುಳು ದುಡಿದು ವಿಧಾನ ಸಭೆ ಚುನಾವಣೆಯಲ್ಲಿ ಗೆಲ್ಲಿಸಿ ತಾಲ್ಲೂಕಿನ ಜನತೆಗೆ ದ್ರೋಹ ಮಾಡಿದ್ದವೇ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್,ವಿ ಮಂಜುನಾಥ್ ತಮ್ಮ ಬೇಸರ ವ್ಯಕ್ತಪಡಿಸಿದರು.
ಹಳೆ ಉಪ್ಪಾರಹಳ್ಳಿಯಲ್ಲಿ ಇರುವ ತೋಟದ ಮನೆಯ ಸುದ್ದಿಗೊಷ್ಥಿಯಲ್ಲಿ ಮಾತನಾಡಿದ ಅವರು ಕಳೆದ ಎರಡು ವರ್ಷಗಳಿಂದ ನಾನು ಮತ್ತು ನಮ್ಮ ಮುಖಂಡರು ಮೌನಕ್ಕೆ ಶರಣಾಗಿದ್ದೇವೆ ಆದರೆ ಇತ್ತೀಚಿನ ದಿನಗಳಲ್ಲಿ ತಾಲ್ಲೂಕಿನ ರಾಜಕಾರಣ ಹಣ ಮತ್ತು ದೌರ್ಜನ್ಯಗಳಿಂದ ತೀವ್ರ ಹದೆಗಟ್ಟಿದೆ,ಇದಕ್ಕೆ ಕಾರಣ ಶಾಸಕ ಪುಟ್ಟಸ್ವಾಮಿಗೌಡ.
ಹಣದ ಅಮಲಿನಲ್ಲಿ ಮತ ನೀಡಿರುವವರನ್ನು ಸಹಾ ಲೆಕ್ಕಿಸುತ್ತಿಲ್ಲ ಇದನ್ನು ನೋಡುತ್ತಾ ಸುಮ್ಮನೆ ಇರಲು ಸಾಧ್ಯವಿಲ್ಲ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ನಮ್ಮ ಬೆಂಬಲಿಗರು ನನ್ನ ಮಾತನ್ನು ಗೌರವಿಸಿ ಗೌಡರನ್ನು ಗೆಲ್ಲಿಸುವಲ್ಲಿ ಬಹಳಷ್ಟು ಶ್ರಮಿಸಿದ್ದರು.
ಅದರೆ ಶಾಸಕರ ಬೆಂಬಲಿಗರು ನಮ್ಮ ಕಾರ್ಯಕರ್ತರನ್ನು ವಿನಾಕಾರಣ ಹಲ್ಲೆ ಮಾಡುವುದು ಪೋಲಿಸ್ ಠಾಣೆಯಲ್ಲಿ ದೂರು ನೀಡಿ ಬೆದರಿಕೆ ಹಾಕುವುದು ಹೆಚ್ಚಾಗಿದೆ,ನಾನು ಜಾಲಪ್ಪ ಅವರ ಗರಡಿಯಲ್ಲಿ ಬೆಳೆದು ರಾಜಕೀಯ ಕಲಿತ ವ್ಯಕ್ತಿ ಇಂತಹ ಬೆದರಿಕೆಗಳಿಗೆ ಬಗ್ಗುವ ವ್ಯಕ್ತಿತ್ವ ನನ್ನದಲ್ಲ ಎಂದು ಪ್ರತ್ಯಕ್ಷವಾಗಿ ಶಾಸಕರಿಗೆ ಟಾಂಗ್ ನೀಡಿದರು.
ಸಣ್ಣಪುಟ್ಟ ಚುನಾವಣೆಯಲ್ಲಿ ಬದ್ದತೆ ಇಲ್ಲದ ವ್ಯಕ್ತಿಗಳನ್ನು ನಿಲ್ಲಿಸಿ ಹಣ ನೀಡಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ.
ಎಂತೆಂಥ ಮಹಾನ್ ವ್ಯಕ್ತಿಗಳು ಹುಟ್ಟಿ ನಮ್ಮ ತಾಲೂಕಿನ ಕೀರ್ತಿಯನ್ನು ರಾಜ್ಯ ಮಟ್ಟದಲ್ಲಿ ಸಾರಿದ್ದಾರೆ ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾವು ತಪ್ಪು ಮಾಡಿದ್ದೇವೆ ತಾಲೂಕಿನ ಮಹಾಜನತೆ ನಮ್ಮನ್ನು ಕ್ಷಮಿಸಿ ಪ್ರತಿ ಚುನಾವಣೆಯಲ್ಲಿ ಹಣದ ಹೊಳೆ ಹರಿಸಿ ಗೆಲ್ಲುವುದೊಂದೇ ಇವರ ಏಕೈಕ ಗುರಿಯಾಗಿದೆ.
ಇದು ಪ್ರಜಾಪ್ರಭುತ್ವ ಆಶಯಗಳಿಗೆ ಧಕ್ಕೆ ಉಂಟುಮಾಡುತ್ತಿದೆ ಇಂತಹ ಜನಪ್ರತಿನಿದಿಗಳನ್ನು ನಾವು ಈಗಲೇ ಮಟ್ಟ ಹಾಕಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಯುವ ಜನತೆ ಭವಿಷ್ಯ ಹಾಳು ಮಾಡಿದಂತೆ ಅಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುಂಬರುವ ಎಲ್ಲಾ ಚುನಾವಣೆಗಳಲ್ಲಿಯೂ ಈ ಸೋಲಾರ್ ಉದ್ಯಮಿಯನ್ನು ಮಟ್ಟ ಹಾಕಲು ಪಕ್ಷತೀತವಾಗಿ ತಾಲ್ಲೂಕಿನ ಎಲ್ಲಾ ಪಕ್ಷದ ನಾಯಕರು, ದಲಿತ ಸಂಘಟನೆಗಳು, ಹಾಗು ರೈತರು ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ.
ಇಲ್ಲವಾದಲ್ಲಿ ಹಣ ಮತ್ತು ರಾಜಕಾರಣ ಬೆದರಿಕೆ ರಾಜಕಾರಣ ಬರುತ್ತದೆ ಇದು ತಾಲ್ಲೂಕಿಗೆ ಮಾರಕವಾಗಲಿದೆ,
ಬ್ರಿಟಿಷರ ಮೇಲೆ ಯುದ್ಧ ಮಾಡಿ ಸ್ವತಂತ್ರ ವನ್ನು ಪಡೆದುಕೊಂಡ ಹಾಗೆ ಈಗ ಇವರು ಮಾಡುತ್ತಿರುವಂತಹ ದೌರ್ಜನ್ಯ, ದಬ್ಬಾಳಿಕೆ,ಬೆದರಿಕೆಗಳ, ಮೇಲೆ ಯುದ್ಧ ಮಾಡಬೇಕಾಗಿರುವ ಸಮಯ ಕೂಡಿಬಂದಿದೆ .
ಮುಖಂಡರಾದ ಜಿಕೆ ಸತೀಶ್ ಮಾತನಾಡಿ ನಾನು ಮತ್ತು ಮಂಜುನಾಥ್ ಅವರು ನಿಷ್ಥವಂತ ಕಾಂಗ್ರೆಸ್ ಮುಖಂಡರು ಅಗಿದ್ದವೇ,ನಾವು ಮೌಲ್ಯಧಾರಿತ ರಾಜಕಾರಣ ಮಾಡಿಕೊಂಡು ಬಂದಿದ್ದವೇ ಅದರೂ ಮಾಜಿ ಶಾಸಕ ಶಿವಶಂಕರರೆಡ್ಡಿ ಅವರ ಬಿನ್ನ ಅಭಿಪ್ರಾಯದಿಂದ ಅವರಿಂದ ದೂರ ಉಳಿದು ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಗೌಡರನ್ನು ಗೆಲ್ಲಿಸಲು ನಾವು ಮನೆ ಮಕ್ಕಳನ್ನು ಬಿಟ್ಟು ಹಗಲು ರಾತ್ರಿ ದುಡಿದ ನಮಗೆ ಪುಟ್ಟಸ್ವಾಮಿಗೌಡರ ಬಳಿ ಕಿಂಚೂತ್ತು ಬೆಲೆ ಇಲ್ಲದಂತೆ ಆಗಿದೆ, ಹಣದ ಅಮಲಿನಲ್ಲಿ ಇರುವ ಗೌಡರಿಗೆ ಮುಂದಿನ ಚುನಾವಣೆಯಲ್ಲಿ ಸೋಲಿನ ರುಚಿ ತೋರಿಸಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.
ಈ ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಗೆದರೆ ಸತೀಶ್, ಯುವ ಡಾಟ್ ಕಾಮ್ ಮಂಜು,ಹೊಸೂರಿನ ಮಂಜುನಾಥ್ ಅವರ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಹಾಜರಿದ್ದರು.