ಕಲಾ ನಿರ್ದೇಶಕ ಎಂ.ವಿ.ನಾಯ್ಡು ಅವರಿಗೆ ರಂಗ ಜಂಗಮ ಪ್ರಶಸ್ತಿ ಪ್ರಧಾನ
ದೇವನಹಳ್ಳಿ ತಾಲೂಕಿನ ತೈಲಗೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಾಗಲೂರು ದಾರಿದೀಪ ಎಸ್ಸಿಐ ಲೀಜನ್ ಕಾರ್ಯಕ್ರಮದಲ್ಲಿ ರಂಗಭೂಮಿ ಕಲಾವಿದರಾಗಿ ಸೇವೆ ಸಲ್ಲಿಸಿದ ಕಲಾ ನಿರ್ದೇಶಕ ಎಂ.ವಿ.ನಾಯ್ಡು ಅವರಿಗೆ ರಂಗ ಜಂಗಮ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಈ ವೇಳೆ ಕಾರಹಳ್ಳಿ ಗ್ರಾಪಂ ಸದಸ್ಯ ರಾಜಣ್ಣ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅದ್ಯಕ್ಷ ಜಂದ್ರಶೇಖರ್, ಹಡಪದ ಕಾರಹಳ್ಳಿ ಮೀನಾಕ್ಷಿ ಮುನಿಕೃಷ್ಣಪ್ಪ, ಎಸ್ಸಿಐ ಸಂಸ್ಥೆಯ ಅದ್ಯಕ್ಷ ಅಮೀತ್ ಜೋಶ್ನಾ, ಕಲಾವಿದರಾದ ಹೊಸಳ್ಳಿ ವಾಸುದೇವ್, ಕಾರಹಳ್ಳಿ ದ್ಯಾವಪ್ಪ, ನಿವೃತ್ತ ಶಿಕ್ಷಕ ನಾರಾಯಣಪ್ಪ ಇನ್ನಿತರರು ಇದ್ದರು.
ಚಿತ್ರ: ತೈಲಗೆರೆ ಗ್ರಾಮದಲ್ಲಿ ನಡೆದ ಬಾಗಲೂರು ದಾರಿದೀಪ ಎಸ್ಸಿಐ ಲೀಜನ್ ಕಾರ್ಯಕ್ರಮದಲ್ಲಿ ಕಲಾ ನಿರ್ದೇಶಕ ಎಂ.ವಿ.ನಾಯ್ಡು ಅವರಿಗೆ ರಂಗ ಜಂಗಮ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.