logo

ತಾಳಿಕೋಟಿ ತಾಲ್ಲೂಕಿನ ಕಲಿಕೇರಿ ಗ್ರಾಮಕ್ಕೆ ವಿದ್ಯುತ್ ಪೂರೈಕೆ ಯೋಜನೆಗೆ ಚಾಲನೆ



📰

ತಾಳಿಕೋಟಿ:
ತಾಲೂಕಿನ ಕಲಿಕೇರಿ ವಿದ್ಯುತ್ ವಿತರಣಾ ಕೇಂದ್ರದಿಂದ ಆ ಭಾಗದ ರೈತರ ಹೊಲಗಳಿಗೆ ಬೆಳಗಿನ 7 ಗಂಟೆಗೆ ನಿಯಮಿತವಾಗಿ ವಿದ್ಯುತ್ ಪೂರೈಸುವ ಮಹತ್ವದ ಯೋಜನೆಗೆ ಮಂಗಳವಾರ ದೇವರಹಿಪ್ಪರಗಿ ಕ್ಷೇತ್ರದ ಶಾಸಕ ಭೀಮನಗೌಡ (ರಾಜುಗೌಡ) ಬಿ. ಪಾಟೀಲ ಅವರು ಚಾಲನೆ ನೀಡಿದರು.

ಈ ಯೋಜನೆ ಜಾರಿಗೆ ಬರುವ ಮೂಲಕ ರೈತರಿಗೆ ನೀರಾವರಿ ಕಾರ್ಯಗಳಲ್ಲಿ ಅನುಕೂಲವಾಗಲಿದೆ. ಹೊಲಗಳಿಗೆ ಬೆಳಗಿನ ವೇಳೆಯಲ್ಲೇ ವಿದ್ಯುತ್ ದೊರೆಯುವುದರಿಂದ ಕೃಷಿ ಕಾರ್ಯಗಳಲ್ಲಿ ಸುಗಮತೆ ಒದಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರು, ಪಕ್ಷದ ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. ವರದಿ ಸಂಗನಗೌಡ ಗಬಸಾವಳಗಿ ವಿವಾ ನ್ಯೂಸ್ ಜಿಲ್ಲಾ ವರದಿಗಾರರು ವಿಜಯಪುರ

2
229 views