logo

“ಗೋಕಾಕ ನೂತನ ಜಿಲ್ಲೆ ಘೋಷಣೆ ಆಗದಿದ್ದರೆ ಧರಣಿ'

“ಗೋಕಾಕ ನೂತನ ಜಿಲ್ಲೆ ಘೋಷಣೆ ಆಗದಿದ್ದರೆ ಧರಣಿ'
ಗೋಕಾಕ: ನವೆಂಬರ್ 1ರೊಳಗೆ ಗೋಕಾಕ ನೂತನ ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡದೇ ಹೋದರೆ ನವೆಂಬರ್ 2ರಿಂದ ನಿರಂತರ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕಾಂಗ್ರೆಸ್‌ ಮುಖಂಡ ಅಶೋಕ ಪೂಜಾರಿ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಸರ್ಕಾರವೇ ರಚಿಸಿದ ಆಯೋಗಗಳು ಈಗಾಗಲೇ
ಗೋಕಾಕ ಜಿಲ್ಲೆಯಾಗಲು ಸೂಕ್ತ ಎಂದು ಹೇಳಿದ್ದರೂ ಇಲ್ಲಿಯವರೆಗೆ ಆಗಿಲ್ಲ. ರಾಜಕೀಯ ಹಿತಾಸಕ್ತಿ ಇಲ್ಲದಿರುವುದು ಇದಕ್ಕೆ ಕಾರಣ ಎಂದು ದೂರಿದರು.
'ಕೇಂದ್ರ ಸರ್ಕಾರದ
ನಿರ್ದೇಶನದಂತೆ ಬರುವ ಡಿಸೆಂಬರ್
31ರೊಳಗೆ ರಾಜ್ಯ ಸರ್ಕಾರಗಳು
ಗಡಿ ಪ್ರದೇಶಗಳನ್ನು ವಿಗಂಡಣೆ
ಮಾಡಬೇಕು. ಇಲ್ಲದಿದ್ದರೆ ಮುಂದಿನ 3ವರ್ಷಗಳ ಕಾಲ ಯಾವುದೇ ಭೂ ಪ್ರದೇಶಗಳನ್ನು ವಿಭಜಿಸುವ ಹಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಕೂಡಲೇ ಎಚ್ಚೆತ್ತುಕೊಂಡು ಜಿಲ್ಲೆಯ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಅಭಿಪ್ರಾಯ ಪಡೆದು ಜಿಲ್ಲೆ ವಿಭಜನೆಗೆ ಚಾಲನೆ ನೀಡಬೇಕು ಎಂದು ಒತ್ತಾಯಿಸಿದರು' ಎಂದು ಒತ್ತಾಯಿಸಿದರು.
ವಿಶ್ರಾಂತ ಪ್ರಾಚಾರ್ಯ
ಅರ್ಜುನ್ ಪಂಗಣ್ಣವರ, ಸಂಜೀವ
ಪೂಜಾರಿ, ಬಾಳಯ್ಯ ಕಂಬಿ,
ಸದಾಕತಅಲಿ ಮಕಾನದಾರ, ಪ್ರವೀಣ
=ನಾಯಿಕ, ಮಲ್ಲಪ್ಪ ಜಟ್ಟೆನ್ನವರ,
ಲಿಂಗಪ್ಪ ಅಮಿನಭಾವಿ
ಇದ್ದರು.

4
1076 views