logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಶ್ರೀ ಸಿದ್ದೇಶ್ವರ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ತಾ-ಅಥಣಿ ಕೊಟ್ಟಲಗಿ ಜಿ-ಬೆಳಗಾವಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರ

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ
ಶ್ರೀ ಸಿದ್ದೇಶ್ವರ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆ

ತಾ-ಅಥಣಿ

ಕೊಟ್ಟಲಗಿ

ಜಿ-ಬೆಳಗಾವಿ

ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಮೌಖಿಕ ರಸಪ್ರಶ್ನೆ ಸ್ಪರ್ಧೆಯ ಮೂಲಕ

“ಗಡಿನಾಡು ಪ್ರತಿಭೆ”

2 - 28/02/2026

ರಾಷ್ಟ್ರೀಯ ವಿಜ್ಞಾನ ದಿನ ಶನಿವಾರ ದಿನಾಂಕ 28.02.2026ರಂದು ಸಾಯಂಕಾಲ 5:00 ಗಂಟೆಗೆ ಕನ್ನಡದ ಕೋಟ್ಯಾಧಿಪತಿ ಮಾದರಿಯಲ್ಲಿ ರಾಜ್ಯ ಮಟ್ಟದ ಮೌಖಿಕ ರಸಪ್ರಶ್ನೆ ಸ್ಪರ್ಧೆಯನ್ನು ನಮ್ಮ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಧೈಯ:- ನಮ್ಮ ಸಂಸ್ಥೆಯಲ್ಲಿ ಅಧ್ಯಯನ ಮಾಡುವ "ಗಡಿನಾಡು ಪ್ರತಿಭೆ"ಯನ್ನು ಗುರುತಿಸುವುದು.

ಸೂಚನೆ:- *

10 ತಂಡಗಳಿಗಿಂತ ಹೆಚ್ಚಿಗೆ ತಂಡಗಳು ದಾಖಲಾತಿ ಮಾಡಿದಾಗ ಪ್ರಾರಂಭದಲ್ಲಿ ಮುಂಜಾನೆ 10:00 ಗಂಟೆಗೆ ಲಿಖಿತ ರಸಪ್ರಶ್ನೆ ಪರೀಕ್ಷೆಯನ್ನು ಕೈಗೊಳ್ಳಲಾಗುವುದು.

ಈ ಪರೀಕ್ಷೆಯಲ್ಲಿ ಆಯ್ಕೆಯಾದ 10 ತಂಡಗಳಿಗೆ ಸಾಯಂಕಾಲ 5:00 ಗಂಟೆಗೆ ರಾಜ್ಯಮಟ್ಟದ ಕನ್ನಡದ

ಕೋಟ್ಯಾಧಿಪತಿ ಮಾದರಿಯಲ್ಲಿ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗುವುದು.

ಈ ಪರೀಕ್ಷೆಯು ನಮ್ಮ ಶಾಲೆಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ.

ಕಡ್ಡಾಯವಾಗಿ ನಮ್ಮ ಶಾಲೆಯ ವಿದ್ಯಾರ್ಥಿಗಳ ಪಾಲಕರು ಬರಬೇಕು ಹಾಗೂ ತಮ್ಮ ಮಕ್ಕಳಿಗೆ ಪ್ರೋತ್ಸಾಹಿಸಬೇಕು.

ನಮ್ಮ ಶಾಲೆಯ ಎಲ್ಲ ಪಾಲಕರು ಸಾಯಂಕಾಲ 5:00 ಗಂಟೆಗೆ ಶಾಲಾ ಆವರಣಕ್ಕೆ ಬರಬೇಕೆಂದು ವಿನಂತಿ.

ಹೆಸರು ನೋಂದಾಯಿಸಲು ಕೊನೆಯ ದಿನಾಂಕ -26/02/2026

ಈ ಪರೀಕ್ಷೆಯು ಗಡಿನಾಡು ಭಾಗದಲ್ಲಿ ಗಡಿನಾಡು ಪ್ರತಿಭೆಯನ್ನು ಗುರುತಿಸುವ ಸಲುವಾಗಿ ತಂತ್ರಜ್ಞಾನ ಆಧಾರಿತ ಪರೀಕ್ಷೆಯಾಗಿದ್ದು ತಮ್ಮ ಮಕ್ಕಳನ್ನು ಸ್ಪರ್ಧಾತ್ಮಕ ಯುಗಕ್ಕೆ ಅನಿಗೊಳಿಸುವುದಾಗಿದೆ.

ಸರ್ವರಿಗೂ ಆದರದ ಸ್ವಾಗತ

ಸ್ಥಳ:-ಶ್ರೀ ಸಿದ್ದೇಶ್ವರ ವಿದ್ಯಾಸಂಸ್ಥೆ ಕೊಟ್ಟಲಗಿ

*ನಮ್ಮ ಶಾಲೆಯಲ್ಲಿ ಕನ್ನಡ ಕೋಟ್ಯಾಧಿಪತಿ ಮಾದರಿಯಲ್ಲಿ ರಾಜ್ಯಮಟ್ಟದ ಮೌಖಿಕ ರಸಪ್ರಶ್ನೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತರು ಈ ಕಾರ್ಯಕ್ರಮಕ್ಕೆ ಬಂದು ಯಶಸ್ವಿಗೊಳಿಸಬೇಕಾಗಿದೆ ಎಂದು ಸಂಸ್ಥೆ ಯು ಮುಖ್ಯ ಗುರುಗಳಾದ ಶ್ರೀ ಮಹಾಂತೇಶ ಎಸ್ ಬಡಚಿ ರವರು ತಿಳಿಸಿದ್ದಾರೆ.*🙏🙏

1
135 views

Comment